ಮುಖಂಡ ಕಿಶೋರ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕ್ಗಳ ಪಾತ್ರ ಮಹತ್ವದ್ದು, ಅಂತಹ ಬ್ಯಾಂಕ್ಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಇಂದು ಬೀದಿಗೆ ಬರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. 10 ವರ್ಷಗಳ ಹಿಂದೆ ನಿವೃತ್ತನಾದ ಪ್ರಧಾನ ವ್ಯವಸ್ಥಾಪಕನ ಪಿಂಚಣಿ, ಈಗ ನಿವೃತ್ತಿ ಹೊಂದಿದ ಸಾಮಾನ್ಯ ನೌಕರನ ಪಿಂಚಣಿಗೆ ಸಮನಾಗಿದೆ. ಕೇಂದ್ರ ಸರ್ಕಾರಿ ಸೌಕರರ ವೇತನ ಮತ್ತು ಪಿಂಚಣಿ ಆಗಾಗ್ಗೆ ಪರಿಷ್ಕರಣೆಯಾಗುತ್ತದೆ. ಅದೇ ರೀತಿ ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿಯನ್ನೂ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.