ಬನ್ನೇರುಘಟ್ಟ ಜೈವಿಕ ಉದ್ಯಾನ ರಸ್ತೆಯ ಸಂಪಿಗೆಹಳ್ಳಿಯ ಬಳಿ ಬಿಎಸ್ಎನ್ಎಲ್ ಕೇಬಲ್ ಕಡಿತಗೊಂಡಿದ್ದರಿಂದ ನೆಟ್ವರ್ಕ್ ಸ್ಥಗಿತವಾಗಿತ್ತು. ಬಿಎಸ್ಎನ್ಎಲ್ ಜೊತೆಗೆ ಸಿನೆಟ್ ಅಂತರ್ಜಾಲ ಸಂಪರ್ವಿದ್ದರೂ ಅದು ವೇಗವಾಗಿಲ್ಲ. ಹಾಗಾಗಿ ಟಿಕೆಟ್ ನೀಡಲು ತೊಂದರೆ ಉಂಟಾಯಿತು. 12ರ ವೇಳೆಗೆ ಕೆಲಕಾಲ ಕಾರ್ಯನಿರ್ವಹಿಸಿತು. ಮತ್ತೆ ಸರ್ವರ್ ಕೈಕೊಟ್ಟಿತ್ತು. ಇದರಿಂದಾಗಿ ತೊಂದರೆ ಉಂಟಾಯಿತು. ನಾಲ್ಕರ ವೇಳೆಗೆ ಸರಿಯಾಯಿತು. ಬುಧವಾರ 4,400 ಪ್ರವಾಸಿಗರು ಉದ್ಯಾನ ವೀಕ್ಷಿಸಿದ್ದಾರೆ ಎಂದು ಉದ್ಯಾನದ ಉಪನಿರ್ದೇಶಕ ಕುಶಾಲಪ್ಪ ತಿಳಿಸಿದರು.