ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇರ್ ಫೂಟ್ ಇಂಡಿಯಾ ರನ್’ 31ರಂದು

Last Updated 26 ಮಾರ್ಚ್ 2019, 18:27 IST
ಅಕ್ಷರ ಗಾತ್ರ

ಬೆಂಗಳೂರು: ಪಾದರಕ್ಷೆ ಬಳಸುವ ಮಹತ್ವದ ಬಗ್ಗೆಜಾಗೃತಿ ಮೂಡಿಸುವ ಹಾಗೂ ಬಡ ಮಕ್ಕಳಿಗಾಗಿ ಪಾದರಕ್ಷೆ ಸಂಗ್ರಹಿಸುವ ಉದ್ದೇಶದಿಂದ ಸುರಕ್ಷಿತ ಕರ್ನಾಟಕ ಟ್ರಸ್ಟ್‌ ‘ಬೇರ್ ಫೂಟ್ ಇಂಡಿಯಾ ರನ್’ ಬರಿಗಾಲಿನ ಓಟವನ್ನು ಇದೇ 31ರಂದು ಏರ್ಪಡಿಸಿದೆ.

‘ಪಾದರಕ್ಷೆಯನ್ನು ಖರೀದಿಸುವಷ್ಟು ಆರ್ಥಿಕ ಸಾಮರ್ಥ್ಯವಿಲ್ಲದ ಕೊಳಚೆ ಪ್ರದೇಶದ ಮಕ್ಕಳಿಗೆ ನೆರವಾಗುವುದು ಟ್ರಸ್ಟ್‌ನ ಉದ್ದೇಶ. ಬಳಕೆಯೋಗ್ಯ ಪಾದರಕ್ಷೆಗಳನ್ನು ಅಥವಾ ಹಳೆಯ ಬಟ್ಟೆಗಳನ್ನು ಟ್ರಸ್ಟ್‌ಗೆ ನೀಡಬಹುದು. ಅದನ್ನು ಸ್ವಯಂಸೇವಕರು ಅಗತ್ಯವಿರುವ ಬಡಮಕ್ಕಳಿಗೆ ತಲುಪಿಸಲಿದ್ದಾರೆ’ ಎಂದುಟ್ರಸ್ಟ್‌ನ ಸಂಸ್ಥಾಪಕ ಡಾ.ಜೊಯಪ್ಪ ಅಚ್ಚಯ್ಯ ಮಂಗಳವಾರಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘5 ಕಿ.ಮೀ. ಓಟ ಹಾಗೂ 2 ಕಿ.ಮೀ ನಡಿಗೆಯ ಅಭಿಯಾನ ಇದಾಗಿದೆ. ಬೆಳಗ್ಗೆ 7ಗಂಟೆಗೆ ಕಬ್ಬನ್ ಉದ್ಯಾನದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಓಟಕ್ಕೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

ಓಟದ ಮಾರ್ಗ: ವೆಂಕಟಪ್ಪ ಆರ್ಟ್ ಗ್ಯಾಲರಿ–ಕ್ವೀನ್ಸ್ ಪ್ರತಿಮೆ– ಪ್ರೆಸ್‌ಕ್ಲಬ್– ರಾಜ್ಯ ಕೇಂದ್ರ ಗ್ರಂಥಾಲಯ–ಯುಬಿ ಸಿಟಿ

ಸಂಪರ್ಕ:99802 59781

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT