ಭಕ್ತರು ತೀರ್ಥ ಕೊಳಕ್ಕೆ ಹಾಕುವ ನಾಣ್ಯಗಳನ್ನು ಸಂಗ್ರಹಿಸಿ ಮರು ವರ್ಷದ ಪೂಜಾ ಕಾರ್ಯಕ್ರಮಕ್ಕೆ ಸದ್ಬಳಕೆ ಮಾಡಿಕೊಳ್ಳುತ್ತಾರೆ. ಉದ್ಭವ ಬಸವಣ್ಣ ಮೂರ್ತಿಯಿಂದ ಹರಿದು ಬರುವ ನೀರು ಪಕ್ಕದ ತೀರ್ಥಕೊಳಕ್ಕೆ ಸೇರಿಕೊಳ್ಳುವುದರಿಂದ ವರ್ಷಪೂರ್ತಿ ನೀರು ಸಂಪನ್ನವಾಗಿ ಹರಿಯುತ್ತದೆ. ಗ್ರಾಮಸ್ಥರು ಮನೆಗಳಿಂದ ಅಕ್ಕಿಬೆಲ್ಲ, ತರಕಾರಿ, ತೆಂಗಿನಕಾಯಿ ಪ್ರಸಾದ ತಯಾರಿಕೆಗಾಗಿ ನೀಡುತ್ತಾರೆ.