ಬಿಬಿಎಂಪಿಯ ಈ ಪ್ರಯತ್ನದ ಹೊರತಾಗಿಯೂ ನಗರದ ಕೆಲವೆಡೆ ಭಾನುವಾರ ಕಸದ ರಾಶಿ ಹಾಗೆಯೇ ಉಳಿದುಕೊಂಡಿರುವುದು ಕಂಡು ಬಂತು. ‘ರಂಗೋಲಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ನಾವು ಕಸದ ರಾಶಿ ತೆರವುಗೊಳಿಸಿ ರಂಗೋಲಿ ಬಿಡಿಸಿದ ಸುಮಾರು 275 ಕಡೆಗಳಲ್ಲಿ ಯಾರೂ ಕಸ ಹಾಕಿಲ್ಲ. ಹಾಗಾಗಿ ಇನ್ನಷ್ಟು ದಿನ ನಾವು ಈ ಪರಿಪಾಠವನ್ನು ಮುಂದುವರಿಸುತ್ತೇವೆ’ ಎಂದು ಸರ್ಫರಾಜ್ ಖಾನ್ ತಿಳಿಸಿದರು.