ಆದರೆ, ಪುಟ್ಟೇಗೌಡರ ಸಮರ್ಥನೆಯನ್ನು ಒಪ್ಪದ ನ್ಯಾಯಪೀಠ, ‘ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ವರದಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ನಿಮ್ಮ ಬಿಬಿಎಂಪಿ ಕಾನೂನು ಬಾಹಿರ ಚಟುವಟಿಕೆಗಳನ್ನು ಎಷ್ಟೊಂದು ಸೊಗಸಾಗಿ ನಿರ್ವಹಿಸುತ್ತಿದೆಯಲ್ಲಾ’ ಎಂದು ಕುಟುಕಿತು.