ಬೆಂಗಳೂರು: ‘ಡಿಸೆಂಬರ್ 16ರಂದು ನಡೆಯಲಿರುವ ‘ರಾಷ್ಟ್ರಿಯ ವಿಜಯ ದಿವಸ್’ ವೇಳೆಗೆ 80 ಅಡಿ ಎತ್ತರದ ವೀರಗಲ್ಲು ಸ್ಥಾಪನೆ ಆಗಬೇಕಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧಿಕಾರಿಗಳಿಗೆ ತಾಕೀತು ಮಾಡಿದರು.