ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ನೈತಿಕತೆ ಮತ್ತು ಆದರ್ಶಗಳಿಂದ ಮುಂದಿನ ತಲೆಮಾರನ್ನು ಸಶಕ್ತಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಸತ್ಯನಾರಾಯಣ ರಾಜು, ಗಿರಿಧರ್ ಮತ್ತು ಡಾ. ಸಿಂಹ ಶಾಸ್ತ್ರಿ ಭಾಗವಹಿಸಿದ್ದರು.