ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಡಿಜಿಪಿ ಅವರನ್ನು ಭೇಟಿಯಾದ ನಿಯೋಗ, ‘ಕಾಮಾಕ್ಷಿಪಾಳ್ಯದ ಮನು ಎಂಬ ಹುಡುಗ, ಕೆಲ ದಿನಗಳ ಹಿಂದೆ ಗೋಪಾಲಯ್ಯ ಅವರ ತಮ್ಮನ ಮಗಳನ್ನು ಪ್ರೇಮ ವಿವಾಹವಾಗಿದ್ದ. ಆತನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ಪ್ರಾಮಾಣಿಕ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿತು.