‘ಅವರ ಮಾತು ನಂಬಿದ್ದ ಸುಬ್ರಮಣ್ಯ, ಹುಳಿಮಾವು ಬಳಿ ರಾತ್ರಿ ಬಂದಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ‘ನಾವು ಪೊಲೀಸರು. ನೀನು ಯುವತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಿಯಾ ಎಂಬ ಮಾಹಿತಿ ಇದೆ. ₹50 ಸಾವಿರ ಕೊಟ್ಟರೆ ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ, ಬಂಧಿಸಿ ಠಾಣೆಗೆ ಕರೆದೊಯ್ಯುತ್ತೇವೆ’ ಎಂದಿದ್ದರು. ಭಯಗೊಂಡಿದ್ದ ಸುಬ್ರಮಣ್ಯ, ಮನೆಗೆ ಕರೆದುಕೊಂಡು ಹೋಗಿ ಚಿನ್ನದ ಸರ ಹಾಗೂ ₹2 ಸಾವಿರ ನಗದು ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ಹೆಚ್ಚಿನ ಹಣ ಕೇಳಿದ್ದರು’