‘ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುವ ಕಾರ್ಮಿಕರನ್ನು ಮಾತ್ರ ಬೆಂಬಲಿಸುವ ವ್ಯವಸ್ಥಾಪಕರು, ಆ ಕಾರ್ಮಿಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಅವರು ಕೇಳಿದ ಮಾರ್ಗಗಳನ್ನು ನೀಡುತ್ತಾರೆ. ‘ಸದ್ಯದಲ್ಲೇ ನಾನು ದೊಡ್ಡ ಹುದ್ದೆಗೆ ಹೋಗುತ್ತೇನೆ. ಆಗ ನಿಮಗೆಲ್ಲ ಗ್ರಹಚಾರ ಬಿಡಿಸುತ್ತೇನೆ’ ಎಂದು ನಮಗೆ ಬೆದರಿಸುತ್ತಾರೆ. ಇವರ ಕಾಟ ಎಷ್ಟು ದಿನ ಸಹಿಸಿಕೊಳ್ಳುವುದು. ಈ ಕಿರುಕುಳದಿಂದ ನಮಗೆ ತಕ್ಷಣವೇ ಮುಕ್ತಿ ಬೇಕು’ ಎಂದು ಆಗ್ರಹಿಸಿದರು.