‘ಅದಾದ ಕೆಲ ನಿಮಿಷಗಳ ಬಳಿಕ ಪುನಃ ಕರೆ ಮಾಡಿದ್ದ ಅಪರಿಚಿತ, ‘ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಮೊಬೈಲ್ ನಂಬರ್ಗೆ ಕಳುಹಿಸಿ. ನೀವು ಕೇಳಿದಷ್ಟು ಹಣವನ್ನು ಖಾತೆಗೆ ಹಾಕುತ್ತೇವೆ. ಹಣ ತಲುಪಿದ ನಂತರ, ನಾವು ಹೇಳಿದ ಚರ್ಚ್ಗೆ ನೀವು ಬಾಂಬ್ ಇಡಬೇಕು’ ಎಂದು ಹೇಳಿದ್ದರು. ಗಾಬರಿಗೊಂಡ ಲಿಂಗರಾಜು, ಕರೆ ಕಡಿತಗೊಳಿಸಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.