ಶ್ವಾನ ಹಾಗೂ ಬಾಂಬ್ ನಿಷ್ಕ್ರಿಯ ದಳಗಳ ಜತೆ ಕುಮಾರಸ್ವಾಮಿ ಅವರ ಮನೆಗೆ (ಜೆ.ಪಿ.ನಗರ 3ನೇ ಹಂತ) ತೆರಳಿದ ಪೊಲೀಸರು, ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರನ್ನು ಮನೆ ಯಿಂದ ಆಚೆ ಕಳುಹಿಸಿ ಸುಮಾರು ಮುಕ್ಕಾಲು ತಾಸು ಶೋಧ ನಡೆಸಿದರು. ಯಾವುದೇ ಸ್ಫೋಟಕ ಪತ್ತೆಯಾಗದಿದ್ದಾಗ, ಅದೊಂದು ‘ಹುಸಿ ಕರೆ’ ಎಂದು ಘೋಷಿಸಿ ನಿಟ್ಟುಸಿರು ಬಿಟ್ಟಿದ್ದರು.