ಕಾರ್ಮಿಕರು 21 ತಿಂಗಳಿನಿಂದ ಇಲ್ಲಿ ಸಂಬಳವಿಲ್ಲದೆ ದುಡಿಯುತ್ತಿದ್ದರು. ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದ ಘಟಕದ ಮಾಲೀಕರಿಬ್ಬರು, ಯಾವುದೇ ಸುರಕ್ಷಿತ ಸಲಕರಣೆಗಳನ್ನು ನೀಡದೆ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದರು. ಇತ್ತೀಚೆಗೆ ಅವರಿಂದ ತಪ್ಪಿಸಿಕೊಂಡು ಬಂದಿದ್ದ ಒಬ್ಬ ಕಾರ್ಮಿಕ, ಮಧ್ಯಪ್ರದೇಶದ ‘ಜನ್ ಸಾಹಸ್’ ಸ್ವಯಂ ಸೇವಕ ಸಂಸ್ಥೆಯ ಸಹಾಯವಾಣಿಗೆ ಕರೆ ಮಾಡಿ ದುಃಖ ತೋಡಿಕೊಂಡಿದ್ದ.