ಪ್ರಕರಣವೇನು?: ಮೈಸೂರು ವಲಯದ ಬಿಎಸ್ಎನ್ಎಲ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶಬರೀಶ ಕುಮಾರ, ಮಾದೇಶ, ವಿ.ಶಿವಕುಮಾರ, ಮೊಹಮದ್ ಅಲಿ ಮತ್ತು ಸಿ.ಎಸ್ ಚಂದ್ರಾ, ‘ನಾವು ಬ್ರಾಡ್ಬ್ಯಾಂಡ್, ಟವರ್, ಎಕ್ಸ್ಚೇಂಚ್ ನಿರ್ವಹಣೆ, ದೋಷ ಸರಿಪಡಿಸುವಿಕೆ ಸೇರಿದಂತೆ ನೆಟ್ವರ್ಕ್ಗೆ ಸಂಬಂಧಿಸಿದ ಎಲ್ಲಾ ಕೆಲಸ ಮಾಡುತ್ತೇವೆ. ಆದ್ದರಿಂದ ನಮ್ಮನ್ನು ಕುಶಲ ಕಾರ್ಮಿಕರೆಂದು ಪರಿಗಣಿಸಬೇಕು. ಅಂತೆಯೇ ಕುಶಲ ಕಾರ್ಮಿಕರಲ್ಲದವರಿಗೆ ನೀಡಲಾಗುತ್ತಿರುವ ವೇತನವನ್ನು ಬದಲಾಯಿಸಬೇಕು’ ಎಂದು ಕೋರಿದ್ದರು.