‘ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಜುಳಾ, ಟಿನ್ ಫ್ಯಾಕ್ಟರಿ ನಿಲ್ದಾಣದಿಂದ ಫಿನಿಕ್ಸ್ ಮಾಲ್ಗೆ ಹೋಗುವ ಬಿಎಂಟಿಸಿ ಬಸ್ ಹತ್ತಿದ್ದರು. ಸಿಂಗಯ್ಯಪಾಳ್ಯ ನಿಲ್ದಾಣದಲ್ಲಿ ಇಳಿದುಕೊಂಡು ಬ್ಯಾಗ್ ಗಮನಿಸಿದ್ದಾಗ ಜಿಪ್ ತೆರೆದಿದ್ದು ಗೊತ್ತಾಗಿತ್ತು. ಪರಿಶೀಲಿಸಿದಾಗ, ಚಿನ್ನದ ಸರ ಕಳುವಾಗಿದ್ದು ಗಮನಕ್ಕೆ ಬಂದಿತ್ತು. ಪ್ರಯಾಣದ ನಡುವೆಯೇ ಬ್ಯಾಗ್ನಲ್ಲಿದ್ದ ಸರ ಹಾಗೂ ಚುನಾವಣಾ ಗುರುತಿನ ಚೀಟಿಯನ್ನು ದಂಪತಿ ಕದ್ದಿದ್ದರು’ ಎಂದು ಪೊಲೀಸರು ಹೇಳಿದರು.