ಬೆಂಗಳೂರು: ಕೆನರಾ ರಿಲೀಫ್ ಆ್ಯಂಡ್ ವೆಲ್ಫೇರ್ ಸೊಸೈಟಿ ಸಹಯೋಗದೊಂದಿಗೆಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಮಹಿಳಾ ಸಬಲೀಕರಣ ವಿಭಾಗ ಬನಶಂಕರಿ 2ನೇ ಹಂತದ ಮಾತೃಛಾಯ ಆವರಣದಲ್ಲಿ ಕರಕುಶಲ ವಸ್ತುಗಳ ಮೇಳ ‘ಕೆನರಾ ಉತ್ಸವ’ವನ್ನು ಆಯೋಜಿಸಿದೆ.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೆಮೇಳವನ್ನುಉದ್ಘಾಟಿಸಿದರು. ಬಳಿಕ ಕರಕುಶಲ ಮಳಿಗೆಗಳಿಗೆ ಭೇಟಿ ನೀಡಿ, ಮಹಿಳೆಯರ ಕೌಶಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಉದ್ಯಮಿಗಳಿಗೆ ಕೆನರಾ ಬ್ಯಾಂಕ್ ಸಹಾಯಹಸ್ತ ಚಾಚಲಿದೆ ಎಂದು ಅಭಯ ನೀಡಿದರು.
ಈ ಮೇಳ ಶನಿವಾರದವರೆಗೂ ನಡೆಯಲಿದ್ದು, ಕೆನರಾ ಬ್ಯಾಂಕ್ ಪ್ರಾಯೋಜಕತ್ವದಆರ್ಟಿಸನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ತಯಾರಿಸಿದಸಿದ್ಧ ಉಡುಪು, ಆಭರಣ, ಕರಕುಶಲ ವಸ್ತು, ಆಹಾರ ಉತ್ಪನ್ನ, ಕೆತ್ತನೆ ಮತ್ತುಮಣ್ಣಿನ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.