ತಾಲ್ಲೂಕಿನ ಆವಡದೇನಹಳ್ಳಿಯ ಮುನಿರಾಜು (26), ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಬಂದ ಅಲಯನ್ಸ್ ವಿವಿ ವಿದ್ಯಾರ್ಥಿಯ ಕಾರೊಂದು ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮುನಿರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರು ಬುಧವಾರ ಮೃತಪಟ್ಟರು. ಸ್ಥಳೀಯರು ಹಾಗೂ ಕುಟುಂಬದವರು ಶವದೊಂದಿಗೆ ಪ್ರತಿಭಟನೆ ನಡೆಸಿದರು.