ಲಗ್ಗೆರೆಯ ಚೌಡೇಶ್ವರಿ ನಗರ ನಿವಾಸಿ ಕೆ.ಪ್ರದೀಪ್, ಕಬ್ಬನ್ ಪೇಟೆಯ ಮಂಜುನಾಥ್ ಬಂಧಿತ ಸರಗಳ್ಳರು. ಇವರು ಕದ್ದು ತರುತ್ತಿದ್ದ ಒಡವೆಗಳನ್ನು ವಿಲೇವಾರಿ ಮಾಡುತ್ತಿದ್ದ ಪ್ರದೀಪ್ನ ಸಂಬಂಧಿ ಚೋಳರಪಾಳ್ಯದ ಸುನೀಲ್ ಸಹ ಜೈಲು ಸೇರಿದ್ದಾನೆ. ಆರೋಪಿಗಳಿಂದ ₹ 8 ಲಕ್ಷ ಮೌಲ್ಯದ 265 ಗ್ರಾಂ ಚಿನ್ನಾಭರಣ ಹಾಗೂ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.