‘ಅಪಘಾತ ಹಾಗೂ ಸಂಚಾರ ಉಲ್ಲಂಘನೆ ಪ್ರಕರಣಗಳ ವಿಚಾರಣೆಯ ಉಸ್ತುವಾರಿಗಾಗಿ ಸದ್ಯ ಪ್ರತಿ ಠಾಣೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಹಲವು ವರ್ಷಗಳಿಂದ ಅದೊಂದೇ ಕೆಲಸವನ್ನು ಕಾಯಂ ಆಗಿ ಮಾಡುತ್ತಿರುವ ಸಿಬ್ಬಂದಿ, ಕೆಲವೇ ವಕೀಲರೊಂದಿಗೆ ಸಂಪರ್ಕವಿಟ್ಟುಕೊಂಡು ಅವರಿಗಷ್ಟೇ ಪ್ರಕರಣಗಳನ್ನು ಒಪ್ಪಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಕೆಲವು ವಕೀಲರು, ಸಿಬ್ಬಂದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಹರಿಶೇಖರನ್ ಹೇಳಿದ್ದಾರೆ.