ತಾನು ಮಾಜಿ ಶಾಸಕರ ಪುತ್ರನೆಂದು ಹೇಳಿಕೊಂಡು ಆಗಾಗ್ಗೆ ವಿಧಾನಸೌಧಕ್ಕೆ ಬರುತ್ತಿದ್ದ ಕಾರ್ತಿಕೇಯನ್, ಸತೀಶ್ ಸೇರಿದಂತೆ ಅಲ್ಲಿನ ಕೆಲ ನೌಕರರನ್ನು ಪರಿಚಯಿಸಿಕೊಂಡಿದ್ದ. ಆತನಿಗೆ ದಿನಕ್ಕೆ ₹ 2 ಸಾವಿರ ಕೊಟ್ಟು, ಕಾರನ್ನು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದ. ಅದರ ನೋಂದಣಿ ಫಲಕದ ಮೇಲಿದ್ದ ‘ಕರ್ನಾಟಕ ಸರ್ಕಾರ’ದ ಲೋಗೋವನ್ನೇ ಉದ್ಯಮಿ ರಮೇಶ್ ಅವರಿಗೆ ತೋರಿಸಿ, ‘ನಾನು ಈ
ರಾಜ್ಯದ ಸಚಿವ. ನಿಮಗೆ ಕಡಿಮೆ ಬಡ್ಡಿ ದರದಲ್ಲಿ ₹ 100 ಕೋಟಿ ಸಾಲ ಕೊಡಿಸುತ್ತೇನೆ’ ಎಂದು ಹುಸಿ ಭರವಸೆ ಕೊಟ್ಟಿದ್ದ.