ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಲ್ಲಾ ಪಕ್ಷಗಳು ಇಂದು ರಾಜಕಾರಣದಲ್ಲಿ ಮುಳುಗಿವೆ. ಇದೆಲ್ಲವನ್ನು ನೋಡಿದರೆ ಜನರು ಒಂದು ಪಕ್ಷಕ್ಕೆ ಅಧಿಕಾರ ನೀಡಲು ತೀರ್ಮಾನಿಸಿದಂತೆ ಕಾಣುತ್ತಿದೆ. ರಾಜ್ಯ ರಾಜಕಾರಣ ಇಂದು ಕವಲು ದಾರಿಯಲ್ಲಿದೆ. ಮೈತ್ರಿ ಸರ್ಕಾರದಿಂದ ಜೆಡಿಎಸ್ಗೆ ಲಾಭವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಸರ್ಕಾರ ಉಳಿಯುತ್ತದೆ, ಇಲ್ಲದಿದ್ದರೆ ಕಷ್ಟ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ 37 ಸೀಟು ಗೆದ್ದವರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ಇದನ್ನು ಅರಿತು ಸರ್ಕಾರ ಸಮನ್ವಯತೆಯಿಂದ ಮುನ್ನಡೆಯಬೇಕು’ ಎಂದರು.