ಸಮಾವೇಶದ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ‘ಹೊಸ ಅನ್ವೇಷಣೆ ಎನ್ನುವುದು ಭವಿಷ್ಯದ ಮಹತ್ವದ ಅಂಶಗಳಲ್ಲೊಂದು. ಕೈಗಾರಿಕೆಗಳ ಮುಖ್ಯಸ್ಥರು, ಶಿಕ್ಷಣತಜ್ಞರು, ತಂತ್ರಜ್ಞರು, ಯುವ ಸಂಶೋಧಕರು ಮತ್ತು ನೀತಿ ನಿರೂಪಕರನ್ನು ಒಂದೆಡೆ ಸೇರಿಸಿ, ಅವರಿಗೆ ವೇದಿಕೆ ಒದಗಿಸಲಾಗುತ್ತದೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.