ಸುಮನಾ ಕಿತ್ತೂರು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆದೇಶ ಹೊರಡಿಸಿತ್ತು. ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ನಿರ್ದೇಶಕ ಲೆಸ್ಲಿ ಕರ್ವಾಲೋ, ಲೇಖಕ ವಿ.ಲಕ್ಷ್ಮೀಪತಿ, ವಸ್ತ್ರಾಲಂಕಾರ ತಜ್ಞ ಚಿನ್ಮಯ್, ಛಾಯಾಗ್ರಾಹಕ ಬಿ.ಎಲ್. ಬಾಬು, ಸಂಕಲನಕಾರ ಎಸ್. ಶಿವಕುಮಾರಸ್ವಾಮಿ ಮತ್ತು ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಈ ಸಮಿತಿಯ ಸದಸ್ಯರು ಎಂದು ಆದೇಶದಲ್ಲಿ ಹೇಳಲಾಗಿದೆ.