ಪರಿಶೀಲನೆ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಮೇಯರ್, ಕೆಲವೆಡೆ ಕುಂದು–ಕೊರತೆ
ಗಳನ್ನು ಆಲಿಸಿದರು. ಟ್ರಿನಿಟಿ ವೃತ್ತದ ಬಳಿ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂನ ಅನಧಿಕೃತ ಕೇಬಲ್ಗಳು ಜೋತು ಬಿದ್ದಿದ್ದನ್ನು ಕಂಡು, ಬೆಸ್ಕಾಂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ತೆರವುಗೊಳಿಸಿದರು. ನಂತರ, ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ಗೆ ಭೇಟಿ ನೀಡಿ, ನೀರುಗಾಲುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ₹1.9 ಕೋಟಿ ವೆಚ್ಚದ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಲು ಸೂಚಿಸಿದರು.