ಇದರಿಂದಾಗಿ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು 23ರ ನಂತರ ಟೆಂಡರ್ ಕರೆಯಬಹುದು. ಚುನಾವಣೆಯ ಮಾದರಿ ನೀತಿ ಸಂಹಿತೆ ಮಾರ್ಚ್ 10ರಂದು ಜಾರಿಗೆ ಬಂದಿದೆ. ಇದು ಮತ ಎಣಿಕೆ ಮುಗಿಯುವ ದಿನದವರೆಗೆ ಜಾರಿಯಲ್ಲಿರುತ್ತದೆ. ತುರ್ತು ಕಾಮಗಾರಿಗಳಿಗೆ ವಿನಾಯಿತಿ ಪಡೆಯಲು ಪರಿಶೀಲನಾ ಸಮಿತಿಯ ಪ್ರಸ್ತಾವ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು. ಮತದಾನ ಮುಗಿದ ಬಳಿಕ ಟೆಂಡರ್ಗಳನ್ನು ಕರೆಯಲು ವಿನಾಯಿತಿ ನೀಡಬೇಕು ಎಂದು ಪರಿಶೀಲನಾ ಸಮಿತಿ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಆಯೋಗ ಸಮ್ಮತಿ ಸೂಚಿಸಿದೆ.