ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಿಸಿದ ಮೌನ, ಒದ್ದೆಯಾದ ಕಣ್ಣಾಲೆ

Last Updated 16 ಫೆಬ್ರುವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು:ಮಾಹಿತಿ ತಂತ್ರಜ್ಞಾನ ಸಂಘದಿಂದ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಉದ್ಯಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿ ಪೋರಾದಲ್ಲಿ ಉಗ್ರರ ದಾಳಿಯಲ್ಲಿ ಹುತ್ಮಾತರಾದ ಯೋಧರಿಗೆ ಭಾವಪೂರ್ಣಶ್ರದ್ಧಾಂಜಲಿ ಸಲ್ಲಿಸಲಾಯಿತು.

ಉದ್ಯಾನದ ಹುತಾತ್ಮ ಯೋಧನ ಪ್ರತಿಮೆ ಮುಂದೆ ಜಮಾಯಿಸಿದ ಜನ ಮೋಂಬತ್ತಿ ಬೆಳಗುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದರು. ನೂರಾರು ಸಂಖ್ಯೆಯ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು. ಗೌರವ ಸಲ್ಲಿಸುವಸಂದರ್ಭ
ದಲ್ಲಿ ಒಂದು ಕ್ಷಣ ಮೌನ ಆವರಿಸಿ, ಅಲ್ಲಿ ಜಮಾಯಿಸಿದ್ದವರಕಣ್ಣಾಲೆಗಳು ಒದ್ದೆಯಾದವು.

ಸೇನೆಯೊಂದಿಗೆ ನಾವಿದ್ದೇವೆ ಎನ್ನುವ ಫಲಕಗಳನ್ನು ಪ್ರದರ್ಶಿಸುವ ಮೂಲಕಸೈನಿಕರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದರು. ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ,‘ಸೈನಿಕರ ಮೇಲಿನ ದಾಳಿಪೈಶಾಚಿಕವಾದದ್ದು. ಸಣ್ಣತನದ ಕೆಲಸ. ಪ್ರತಿಯೊಬ್ಬರು ಇದನ್ನುಖಂಡಿಸಬೇಕು. ಹುತಾತ್ಮ ಸೈನಿಕರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಬೇಕು. ಗುಪ್ತಚರ ಇಲಾಖೆಯವರು ಇಂತಹ ಚಟುವಟಿಕೆಗಳ ಮೇಲೆಕಣ್ಣಿಡಬೇಕು’ ಎಂದು ತಿಳಿಸಿದರು.

‘ಶಾಂತಿ ಕಾಪಾಡುವುದಕ್ಕೆ ಸೇನೆಗೆಸಂಪೂರ್ಣ ಅಧಿಕಾರ ಕೊಡುವ ಮೂಲಕ ಸರ್ಕಾರ ಒಳ್ಳೆ ಕೆಲಸ ಮಾಡಿದೆ. ಆದರೆ ಅದು ಬಹಳ ದಿನ ಮುಂದುವರೆಯಬಾರದು. ಶಾಂತಿ ನೆಲೆಸುವವರಿಗೆ ಮಾತ್ರ ಇರಬೇಕು’ ಎಂದು ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT