ವಿಷಯ ತಿಳಿದ ಸ್ಥಳೀಯರಾದ ಖಾದರ್ ನದಾಫ್, ದಾದಾಪೀರ್, ಅಕ್ಬರ್ ಸಾಬ್, ನಾವಿ ಬಸವರಾಜ್ ಎಂಬುವರು ಸೇರಿ ಹಸುವನ್ನು ಮೇಲಕ್ಕೆತ್ತಿದ್ದಾರೆ. ‘ಗುಂಡಿಯೊಳಗೆ ಇಳಿಯದೆ ಹಸುವನ್ನು ಮೇಲಕ್ಕೆ ಎತ್ತುವುದು ಅಸಾಧ್ಯವಾಗಿತ್ತು. ಗುಂಡಿಯಲ್ಲಿ ಎರಡು ಅಡಿ ನೀರು ಸಹ ಇದ್ದ ಕಾರಣ, ಇಳಿಯುವುದು ಕಷ್ಟವಾಗಿತ್ತು. ಆದರೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಅದರೊಳಗೆ ಇಳಿದು ಹಸುವಿಗೆ ಹಗ್ಗ ಕಟ್ಟಿದರು. ಆ ನಂತರ ನಿಧಾನವಾಗಿ ಅದನ್ನು ಮೇಲಕ್ಕೆ ಎತ್ತಲಾಯಿತು’ ಎಂದು ಖಾದರ್ ನದಾಫ್ ‘ಪ್ರಜಾವಾಣಿ’ಗೆ ತಿಳಿಸಿದರು.