ಯಾತ್ರಿಗಳಿಗೆ ಕೊಡದಿರುವುದಕ್ಕೆ ಕಾರಣವೇನು ಎಂದು ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಅವರನ್ನು ತಹಶೀಲ್ದಾರ್ ಪ್ರಶ್ನಿಸಿದಾಗ, ಅದಕ್ಕೆ ಅವರು ‘ಯಾತ್ರಿಗಳು ತಂಗಿದರೆ ವಿರಮಿಸಿಕೊಳ್ಳಲು ಪೀಠೋಪಕರಣಗಳು ಇಲ್ಲದ್ದರಿಂದ ನೀಡುತ್ತಿಲ್ಲ. ಇವುಗಳನ್ನು ಮಾಡಿಸಲು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆಯಲಾಗಿದೆ. ಹಣವೂ ಮಂಜೂರಾಗಿದೆ. ಪಿಠೋಪಕರಣಗಳನ್ನು ಒದಗಿಸಲು ಅರಣ್ಯ ನಿಗಮಕ್ಕೆ ಕೇಳಿದ್ದು, ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು’ ಎಂಬ ಮಾಹಿತಿ ನೀಡಿದರು.