ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಕಚೇರಿ ಹತ್ತಿರದ ರಾಜಕಾಲುವೆಗೆ 25 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಸುಮಾರು ₹18 ಲಕ್ಷ ವೆಚ್ಚದಲ್ಲಿ ದಾಸನಪ್ಪನ ಪಾಳ್ಯದಿಂದ ಸಂಧ್ಯಾನಗರಕ್ಕೆ ಕಾಂಕ್ರೀಟ್ ರಸ್ತೆ, ರೈಲ್ವೆ ಅಂಡರ್ಪಾಸ್ ನಿಂದ ಕೃಷ್ಣ ಕಾಲೇಜು ಕಡೆ ಸಾಗುವ ರಸ್ತೆಯನ್ನು ₹35 ಲಕ್ಷದಲ್ಲಿ, ಗಣಪತಿ ನಗರ, ತಮ್ಮೆನಹಳ್ಳಿ, ಶಾಂತಿನಗರ, ಲಕ್ಷ್ಮೀಪುರ, ಕೆಂಪಾಪುರ ಗ್ರಾಮಗಳ ಮುಖ್ಯರಸ್ತೆ ಮತ್ತು ಚರಂಡಿಯನ್ನು ₹10 ಕೋಟಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಅವರು ಗುದ್ದಲಿಪೂಜೆ ನೆರವೇರಿಸಿದರು.