ಚನ್ನಪಟ್ಟಣ: ಚಿಕ್ಕಮಣ್ಣು ಗುಡ್ಡೆ ಪ್ರಾದೇಶಿಕ ಅರಣ್ಯವಲಯಕ್ಕೆ ಸೇರಿದ ಮಂಚಶೆಟ್ಟಿಹಳ್ಳಿ ಗೇಟ್ ಬಳಿ ಮಂಗಳವಾರ ಚಿರತೆಯೊಂದು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದೆ.
ಮೂರುವರೆ ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಹಳಿ ದಾಟುವಾಗ ಸಾವಿಗೀಡಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀಧರ್, ಚಂದ್ರನಾಯಕ್ ಮತ್ತು ಸಿಬ್ಬಂದಿ ಇದ್ದರು.