ಬೆಂಗಳೂರು: ರಾಜ್ಯದಲ್ಲಿ ಡೆಂಗೆ ಹಾಗೂ ಚಿಕೂನ್ಗುನ್ಯಾ ಹರಡುವಿಕೆ ಹೆಚ್ಚಾಗಿದ್ದು, ಡೆಂಗೆ ಜ್ವರದಿಂದ ಇದೇ 16ರಿಂದ 20ರ ಅವಧಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
22 ದಿನಗಳಲ್ಲಿ 120 ಡೆಂಗೆ ಪ್ರಕರಣಗಳು ವರದಿಯಾಗಿವೆ. 100 ಹೊಸ ಪ್ರಕರಣ ಸೇರ್ಪಡೆಯಾಗುವುದರೊಂದಿಗೆ ಚಿಕೂನ್ಗುನ್ಯಾ ತೀವ್ರಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಬಿಬಿಎಂಪಿಯಲ್ಲಿ 698, ದಕ್ಷಿಣ ಕನ್ನಡ 540, ಹಾಸನ 243, ದಾವಣಗೆರೆ 222, ಉಡುಪಿ 215, ಕಲಬುರ್ಗಿ 212 ಸೇರಿದಂತೆ ರಾಜ್ಯದಲ್ಲಿ 2,712 ಮಂದಿಯಲ್ಲಿ ಡೆಂಗೆ ಕಾಣಿಸಿಕೊಂಡಿದೆ.
ತುಮಕೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ನಾಲ್ವರು ಮೃತಪಟ್ಟಿದ್ದಾರೆ. 2,049 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಹವಾಮಾನ ಏರುಪೇರಿನಿಂದಾಗಿಯೂ ನಾನಾ ಬಗೆಯ ವೈರಾಣು ಜ್ವರ ಜನರನ್ನು ಬಾಧಿಸುತ್ತಿದೆ.