ನಾಟಕದ ಪ್ರತಿಯನ್ನು ಪೊಲೀಸರಿಗೆ ಕೊಟ್ಟು ಅನುಮತಿ ಪಡೆಯಬೇಕು ಎಂದು ಪೊಲೀಸ್ ಅಧಿಕಾರಿ ಅಲೋಕ್ ನಾಥ್ ಹೇಳಿರುವುದು ರಂಗಭೂಮಿಗೆ ಮಾರಕವಾದ ವರ್ತನೆ. ಬ್ರಿಟಿಷರು ಹಾಗೂ ತುರ್ತು ಪರಿಸ್ಥಿತಿ ಕಾಲದಲ್ಲಿ ಜಾರಿಯಲ್ಲಿದ್ದ ಕಾನೂನುಗಳನ್ನು ಜಾರಿಗೆ ತರುವ ಷಡ್ಯಂತ್ರ ಮತ್ತೆ ನಡೆಯುತ್ತಿದೆ. ರಂಗಾಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಈ ಧೋರಣೆಯನ್ನು ಅಕಾಡೆಮಿ ಖಂಡಿಸುತ್ತದೆ ಎಂದೂ ತಿಳಿಸಿದ್ದಾರೆ.