‘ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ದಲಿತ ಬಡವರಿಗೆ ಗುರುತಿಸಿರುವ ಗೋಮಾಳ ಜಮೀನನ್ನು ವಿತರಿಸುವಂತೆ ಕಂದಾಯ ಸಚಿವರು ಆದೇಶಿಸಿದ್ದರೂ ಅಧಿಕಾರಿಗಳು ಹಕ್ಕುಪತ್ರ ನೀಡದೆ ವಂಚಿಸಿದ್ದಾರೆ. ಸರ್ಕಾರಿ ಜಾಗಗಳನ್ನು ಲಪಟಾಯಿಸಲು ಭೂಗಳ್ಳರು ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷ ಎಚ್.ಮಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.