ಪ್ರಕರಣವೇನು?: ಸುದೀಪ್ ಅವರು ತಮ್ಮ ‘ಕಿಚ್ಚ ಪ್ರೊಡಕ್ಷನ್’ ವತಿಯಿಂದ ‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರು ತಾಲ್ಲೂಕು ಬೈಗೂರಿನ ದೀಪಕ್ ಮಯೂರ್ ಅವರ ಕಾಫಿತೋಟ ಮತ್ತು ಪುರಾತನ ಮನೆಯನ್ನು ಬಳಸಿಕೊಂಡಿದ್ದರು. ‘ಚಿತ್ರಿಕರಣದ ವೇಳೆ ಸುದೀಪ್, ಸ್ಥಳ ಬಾಡಿಗೆ ಪಾವತಿಸಿಲ್ಲ ಮತ್ತು ಸ್ಥಿರಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ’ ಎಂಬುದು ದೀಪಕ್ ಮಯೂರ್ ಆರೋಪ.