‘ಹಾಲುಗಲ್ಲದ ಯುವಕ ತೇಜಸ್ವಿ ಸೂರ್ಯ ವಿಷವನ್ನೇ ಇಟ್ಟುಕೊಂಡಿದ್ದಾನೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಪುಡಿ ಮಾಡಿ ಬಿಸಾಕಬೇಕು ಎನ್ನುತ್ತಾನೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಅನಂತಕುಮಾರ ಹೆಗಡೆ ಹೇಳುತ್ತಾರೆ. ಬುರ್ಕ ಹಾಕಿದವರು, ಟೋಪಿ ಹಾಕಿದವರು ನನ್ನ ಕಚೇರಿಯಲ್ಲಿ ಕಾಣಿಸಬಾರದು. ಮುಸ್ಲಿಮರು ಇರುವ ಪ್ರದೇಶ ಅಭಿವೃದ್ಧಿ ಮಾಡಬಾರದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ. ಇಂಥವರು ಇರುವ ಪಕ್ಷಕ್ಕೆ ಓಟು ಹಾಕಬೇಕೇ’ ಎಂದು ಅವರು ಪ್ರಶ್ನಿಸಿದರು.