ಕೆಲವು ದಿನಗಳಿಂದ ಈಡಿಗ ಸಮುದಾಯದ ಮಠವೊಂದರ ಸಿಬ್ಬಂದಿ ನೆಲ್ಲಿಬೀಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಠಕ್ಕಾಗಿ ಹೊರೆಕಾಣಿಕೆ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಮಠದ ಸಿಬ್ಬಂದಿಯೊಬ್ಬರು ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತ ಯಾಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಶಾಸಕ ಹಾಲಪ್ಪ ಅವರಲ್ಲಿ ದೂರಿದ್ದಾರೆ.