ಹೀಗೆ ಕಸ ಎಸೆಯುತ್ತಿದ್ದವರಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಶಸ್ತ್ರಚಿಕಿತ್ಸಾ ತಜ್ಞ, ವಕೀಲೆ, ಐ.ಟಿ ಉದ್ಯೋಗಿ, ಇಬ್ಬರು ಹೋಟೆಲ್ ಹುಡುಗರು ಸೇರಿದ್ದಾರೆ. ಇಂಥವರನ್ನು ಪತ್ತೆ ಹಚ್ಚಲೆಂದೇ ಗಸ್ತು ತಿರುಗುತ್ತಿದ್ದ ಬಿಬಿಎಂಪಿ ಆರೋಗ್ಯ ನಿರೀಕ್ಷಕ ಮಹೇಶ್ ಅವರ ತಂಡಕ್ಕೆ ಮಂಗಳವಾರ ರಾತ್ರಿ ಇವರು ಸಿಕ್ಕಿಬಿದ್ದರು. ಸಾರಕ್ಕಿ ಕೆರೆ ಬಳಿ ಈ ಕಾರ್ಯಾಚರಣೆ ನಡೆದಿದೆ.