ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಎಚ್ಎಎಲ್ ಪೊಲೀಸರು ಇಸ್ಲಾಂಪುರಕ್ಕೆ ಗಸ್ತು ಹೋಗಿದ್ದರು. ಆಗ ಚೌಕಿ ಧ್ವಂಸವಾಗಿರುವುದು ಅವರ ಕಣ್ಣಿಗೆ ಬಿದ್ದಿದೆ. ಈ ಸಂಬಂಧ ಸ್ಥಳೀಯರನ್ನು ವಿಚಾರಿಸಿದಾಗ, ‘ಕಾರ್ಪೊರೇಟರ್ ಮಂಜುನಾಥ್, ಬಿಬಿಎಂಪಿ ಎಂಜಿನಿಯರ್ ಹಾಗೂ ಇಕ್ತಿಯಾರ್ ಎಂಬುವರು ಚೌಕಿ ಕೆಡವಿದರು’ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ನೋಟಿಸ್ ಕೊಟ್ಟಿದ್ದಾರೆ.