ಶಿವಮೊಗ್ಗ: ಮಳೆ ಸಂಪೂರ್ಣ ವಿರಾಮ ನೀಡಿದ್ದು, ಬಿಸಿಲು ಆವರಿಸಿಕೊಂಡಿದೆ. ನದಿ, ಹಳ್ಳಕೊಳ್ಳಗಳಲ್ಲಿನ ನೀರು ಕಡಿಮೆಯಾಗುತ್ತಿದೆ. ಮಳೆ ಆರ್ಭಟದ ಮಧ್ಯೆ ಕಾಣೆಯಾದವರ ಶವಗಳು ಪತ್ತೆಯಾಗುತ್ತಿವೆ.
ಮೂರು ದಿನಗಳ ಹಿಂದೆ ಗದ್ದೆಗೆ ಹೋಗಿದ್ದಾಗ ನಾಪತ್ತೆಯಾಗಿದ್ದ ತೀರ್ಥಹಳ್ಳಿ ತಾಲ್ಲೂಕು ಕುಡುಮಲ್ಲಿಗೆಯ ಬೆಂಕಿ ಚಂದ್ರಪ್ಪ (40) ಅವರು ಸಮೀಪದ ಹುಂಡುಕೋಳಿ ಹಳ್ಳದಲ್ಲಿ ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.