ಹಿಂದಿನ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿರುವ ಹಾಗೂ ಹೆಚ್ಚಾಗಿದ್ದರೂ ಇನ್ನೂ ಏರಿಸಲು ಸಾಧ್ಯ ಇರುವಂತಹ 30 ಗ್ರಾಮಗಳನ್ನು ಸ್ವೀಪ್ ಸಮಿತಿ ಆಯ್ಕೆ ಮಾಡಿಕೊಂಡಿದೆ. ಮಹದೇವ ಸತ್ತಿಗೇರಿ ಹಾಗೂ ಎಫ್.ಬಿ. ಕನವಲ್ ಅವರ ತಂಡಗಳು ಆ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲಿವೆ. ಅಲ್ಲದೆ ಎಂಟು ಜನರ ಶಿಕ್ಷಕರ ತಂಡವನ್ನು ಸಹ ತಯಾರು ಮಾಡಲಾಗಿದ್ದು, ಮತದಾನದ ಮಹತ್ವ ಸಾರಿ, ಹಕ್ಕು ಚಲಾಯಿಸುವಂತೆ ಅವರು ಪ್ರೇರೇಪಿಸಲಿದ್ದಾರೆ.