‘ಶಂಕರ್ ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ. ಬದಲಿಗೆ, ಇಡೀ ರಾಣೆಬೆನ್ನೂರಿಗೆ ಅವರು ಶಾಸಕರು. ತಾಲ್ಲೂಕಿನ ಜನತೆ ಶಾಂತಿ, ನೆಮ್ಮದಿಯಿಂದ ಬದುಕಬೇಕು. ಅವರಾಗಲಿ, ಅವರ ಬೆಂಬಲಿಗರಾಗಲೀ ದಬ್ಬಾಳಿಕೆಗೆ ಮುಂದಾಗಬಾರದು. ಎಲ್ಲರನ್ನು ಸಹೋದರರಂತೆ ಕಾಣಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.