'ನಾಗನಾಥಪುರದಲ್ಲಿ ನೆಲದಡಿಯಲ್ಲಿ ಗೇಲ್ ಕಂಪನಿ ವತಿಯಿಂದ ಗ್ಯಾಸ್ ಪೈಪ್ ಅಳವಡಿಸಲಾಗಿದೆ. ಅದರ ಮೂಲಕವೇ ಮನೆ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಮುನೇಶ್ವರ ಬ್ಲಾಕ್ನಲ್ಲಿ ವಿದ್ಯುತ್ ತಂತಿ ಅಳವಡಿಸುವುದಕ್ಕಾಗಿಬೆಸ್ಕಾಂ ಗುತ್ತಿಗೆದಾರರು, ನೆಲ ಅಗೆಯುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪೈಪ್ ಒಡೆದು ಅನಿಲ ಸೋರಿಕೆಯಾಗಿ ಮನೆಯಲ್ಲೆಲ್ಲ ಆವರಿಸಿತ್ತು. ನಂತರವೇ ಸ್ಫೋಟ ಸಂಭವಿಸಿತ್ತು' ಎಂದು ನಿವಾಸಿಶ್ರೀನಿವಾಸಲು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಮನೆಯ ಚಾವಣಿ, ಹಿಂಭಾಗ ಹಾಗೂ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಮನೆಯ ರೂಪವೇ ಬದಲಾಗಿದ್ದು, ಬಯಲಿನಂತೆ ಕಾಣುತ್ತಿದೆ. ಕುಟುಂಬದವರೆಲ್ಲ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ’ ಎಂದರು.