ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸ್ಪರ್ಶ: ಆನೆ ಸಾವು

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಕಾಮೇನಹಳ್ಳಿಯ ಹುಲಿಕಲ್ಲೇಶ್ವರ ದೇಗುಲ ಸಮೀಪದ ಜಮೀನಿನ ಬಳಿ ವಿದ್ಯುತ್‌ ಸ್ಪರ್ಶದಿಂದ ಗಂಡಾನೆಯೊಂದು ಮೃತಪಟ್ಟಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ‘ಪ್ರಜಾವಾಣಿ’
ಯೊಂದಿಗೆ ಮಾತನಾಡಿ, ‘ಶುಂಠಿ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್‌ ಬೇಲಿಯ ತಂತಿ ತಗುಲಿ ಸುಮಾರು 18 ವರ್ಷದ ಗಂಡಾನೆ ಮೃತಪಟ್ಟಿದೆ. ಆನೆಯ ದೇಹದಲ್ಲಿ ತಂತಿ ತಗುಲಿದ ಗುರುತುಗಳು ಇದ್ದವು’ ಎಂದರು.

‘ಜಮೀನಿನವರು ತಂತಿಗೆ ವಿದ್ಯುತ್‌ ಹರಿಸಿರುವುದೇ ಆನೆ ಸಾವಿಗೆ ಕಾರಣ. ಜಮೀನಿನವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

‘ವನ್ಯಜೀವಿ ವಿಭಾಗದ ಡಾ.ನಾಗೇಶ್‌ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಕಳೇಬರನ್ನು ಸುಡಲಾಯಿತು’ ಎಂದರು.

ಡಿಎಫ್‌ಒ ಎಚ್‌.ಆರ್‌.ಕುಮಾರ್‌, ಆರ್‌ಎಫ್‌ಒ ಶಿಲ್ಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT