ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ರಿಂದ ಆದಿಶಕ್ತಿ ದೇವಿ ಉತ್ಸವ

Last Updated 16 ಏಪ್ರಿಲ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು:ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಆದಿಶಕ್ತಿ ಕಾಳಿಕಾಂಬ ದೇವಿಯ 54ನೇ ವಾರ್ಷಿಕ ಮಹೋತ್ಸವವು ಇದೇ 19 ಹಾಗೂ 20ರಂದು ನಡೆಯಲಿದೆ.

ಏ.19ರ ರಾತ್ರಿ 9ಕ್ಕೆವೆಂಕಟೇಶ್ವರ ಸ್ವಾಮಿಗೆ ಪ್ರಥಮ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ 11ಗಂಟೆಯ ಬಳಿಕ ಮಡಿಲಕ್ಕಿ (ಸೋಗಲು) ಕಾರ್ಯಕ್ರಮ ನಡೆಯಲಿದೆ.

ಏ.20ರ ಬೆಳಿಗ್ಗೆ 5ಗಂಟೆಯಿಂದ 7ಗಂಟೆಯವರೆಗೆ ಬಾಯಿಬೀಗ ಹಾಗೂ ಗಿಂಡಿ ಉತ್ಸವ ನಡೆಯುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಗ್ರಾಮದಲ್ಲಿಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮರುವಾರದ ಹಬ್ಬದ ಅಂಗವಾಗಿ ಏ.26ರಂದು ಬೆಳಿಗ್ಗೆ 6 ಗಂಟೆಗೆ ಗಿಂಡಿ ಉತ್ಸವ ಹಾಗೂ ಪೂಜಾ ಕುಣಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT