36 ವಿದ್ಯಾರ್ಥಿಗಳು ಉಳ್ಳ ಶಾಲೆಗೆ ಶೌಚಾಲಯವೇ ಇಲ್ಲ. ಹಳೆಯ ಶೌಚಾಲಯವು ಸಂಪೂರ್ಣವಾಗಿ ಅಧ್ವಾನವಾಗಿದೆ. ಹೆಣ್ಣು ಮಕ್ಕಳು ಗ್ರಾಮದ ಮನೆಗಳಲ್ಲಿ ಶೌಚಾಲಯಕ್ಕೆ ಹೋಗುತ್ತಾರೆ. ಗಂಡು ಮಕ್ಕಳು ಬಯಲಿನಲ್ಲಿ ಶೌಚಕ್ಕೆ ಹೋಗಬೇಕಾಗಿದೆ. ಹೊಸ ಕೊಠಡಿಯ ಜೊತೆ ಶೌಚಾಲಯವನ್ನೂ ನಿರ್ಮಿಸಿದ್ದರೆ ಮಕ್ಕಳಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಪೋಷಕರು. 1966ರಲ್ಲಿ ಈ ಶಾಲೆ ಆರಂಭಗೊಂಡಿತ್ತು.ಹಳೆಯ ಕಟ್ಟಡವನ್ನು ಕೆಡವಿ ಜಿಲ್ಲಾ ಪಂಚಾಯಿತಿ ಮತ್ತು ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರ ತಲಾ ₹5 ಲಕ್ಷಗಳ ಅನುದಾನದಿಂದ ಎರಡು ಕೊಠಡಿಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಯಿತು. ಆದರೆ ಹೊಸ ಕೊಠಡಿಗಳಿಗೆ ಇನ್ನು ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಅಧಿಕಾರಿಗಳು ನೀಡಿಲ್ಲ ಎನ್ನುವ ಅಸಮಾಧಾನವನ್ನು ವ್ಯಕ್ತಪಡಿಸಿದರು ಗ್ರಾಮಸ್ಥರು.