ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಅಮ್ನೆಸ್ಟಿ ಕಚೇರಿಗೆ ಬಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗೇಟುಗಳಿಗೆ ಬೀಗ ಹಾಕಿದರು. ಕಚೇರಿಯಲ್ಲೇ ಉಳಿಯುವಂತೆ ಸಿಬ್ಬಂದಿಗೆ ಸೂಚಿಸಿದರು. ಕಂಪ್ಯೂಟರ್ ಹಾಗೂ ಫೋನ್ಗಳನ್ನು ಸ್ವಿಚ್ಆಫ್ ಮಾಡುವಂತೆ ನಿರ್ದೇಶಿಸಿದರು. ದಾಳಿ ಮಧ್ಯರಾತ್ರಿ ಮುಗಿದಿದ್ದು, ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದೂ ಪಟೇಲ್ ಸ್ಪಷ್ಟಪಡಿಸಿದ್ದಾರೆ.