ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಗುರುರಾಜ ಕರಜಗಿ ಅವರನ್ನು ‘ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಆರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಡಾ.ಚಂದ್ರಶೇಖರ ತಾಳ್ಯ (ಸಾಹಿತ್ಯ), ಶ್ರೀಮತಿ ಗಂಗಮ್ಮ ಕೊಪ್ಪಳ (ಸಂಗೀತ), ರಾಜಶೇಖರ ನಿಂಬರಗಿ (ಕೃಷಿ ಹಾಗೂ ನೀರಾವರಿ), ಡಾ.ಸೋ.ಮು.ಭಾಸ್ಕರಾಚಾರ್ (ಕನ್ನಡ ಸೇವೆ), ಬಿ.ಸಿ.ರಮೇಶ್ (ಕಬಡ್ಡಿ) ಇವರು 2018ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವೆಂಬರ್ 20 ರಂದು ಸಂಜೆ 5ಕ್ಕೆ, ನಗರದ ಕನ್ನಡ ಸಾಹಿತ್ಯ ಪರಿಷತ್, ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಮೊತ್ತ ತಲಾ ₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.