ಬಳಿಕ ಸಚಿವ ಸಂಪುಟದ ಸಭೆ ನಡೆದಿತ್ತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾತ್ರಿ 8ಕ್ಕೆ ಬಂಡೆಪ್ಪ ಮಾಹಿತಿ ನೀಡುತ್ತಿದ್ದರು. ಈ ವೇಳೆ ಕರೆಂಟ್ ಹೋಯಿತು. ಬಳಿಕ ಬಂತು. ಕರೆಂಟ್ ಹೋಗಿದ್ದರಿಂದ ಸಚಿವರು ಮುಜುಗರಕ್ಕೆ ಒಳಗಾದರು. ‘ವಿದ್ಯುತ್ ವ್ಯತ್ಯಯ ಇಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರಲ್ಲ. ಈಗ ಹೋಗಿದ್ದು ಹೇಗೆ’ ಎಂದು ಪತ್ರಕರ್ತರು ಕಾಲೆಳೆದರು. ಕೆಲವೊಮ್ಮೆ ಹೀಗಾಗುತ್ತೆ ಬಿಡಿ ಎಂದು ಬಂಡೆಪ್ಪ ಪ್ರತಿಕ್ರಿಯಿಸಿದರು.