ಬೆಂಗಳೂರು:ತೆಲುಗು ವಿಜ್ಞಾನ ಸಮಿತಿ ಕೊಡಮಾಡುವ ’ಶ್ರೀ ಕೃಷ್ಣದೇವರಾಯ ಪುರಸ್ಕಾರ’ಕ್ಕೆ 2019ನೇ ಸಾಲಿನಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ತೆಲುಗಿನ ಹಾಸ್ಯನಟ ಸುನಿಲ್ ಅವರು ಭಾಜನರಾಗಿದ್ದಾರೆ.
ಮಲ್ಲೇಶ್ವರದಕೃಷ್ಣದೇವರಾಯ ಕಲಾಮಂದಿರದಲ್ಲಿಏಪ್ರಿಲ್ 5ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಕಲಾವಿದೆಅಂಬಿಕಾ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷ ಎ.ರಾಧಾಕೃಷ್ಣ ರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.